Posted by: naveenkrhalli | 20/06/2011

ರಾಣಿಯೂ ನೀ……

ಚಂದಿರನ ಮೇಲೆ ಕುಳಿತ ರಾಣಿಯೂ ನೀನು,
ಹೃದಯ ತುಂಬಿ ಪ್ರೀತಿಯ ಕೊಡಲು ನಿಂತ ಪ್ರೇಮಿ ನಾನು.
ಅತೀತ್ತ ನೀ ನೋಡದಿರು ನನ್ನ ಕಂಗಳ ಬಿಟ್ಟು,
ಚಂದಿರನನ್ನೇ ಮರೆತೇ ನಿನ್ನ ಕಂಗಳ ಹೊಲಪನ್ನ ನನ್ನ ಕಂಗಳಲ್ಲಿ ಇಟ್ಟು.
ಜಗವನ್ನೇ ಸುತ್ತುವ ಆಸೆಯೂ ನಿನಗೆ, ಕೈ ಹಿಡಿದು ನಡೆಸುವಾಸೆ ನನಗೆ,
ಮಗುವಂತೆ ನೋಡು ನೀ ನನ್ನ,
ನಿರ್ಮಲವಾದ ಪ್ರೀತಿಯ ಕೊಡುವ ನಾ ಚಿನ್ನ.
ಬಯಸುವೆ ನನ್ನ ಜೀವನ ಹಾದಿಯುದಕ್ಕೂ ನಿನ್ನ,
ಎಂದು ಉಸಿರ ಕಟ್ಟಿಸದಿರು ಮರೆತು ನನ್ನ.
ಮನಸಿನಲ್ಲಿ ಇಟ್ಟು ನಿನ್ನ ನೋಡಿದರೆ ನಾನು,
ಜಗತ್ತೇ ಸುಂದರವೆನಿಸುತ್ತಿದೆ ಇನ್ನ.
ನೊವಲ್ಲು ನಾರುವೆ, ನಲಿವಲ್ಲು ನಾ ಬರುವೆ,
ಜೊತೆ ಜೊತೆಯಾಗಿ ನಡೆದು ಸೇರುವ ನಾವಿಬ್ಬರು ದಡವನ್ಣ,
ನಡುದಾರಿಯಲ್ಲಿ ಎಂದು ಕೈ ಬಿಡದಿರು ಎನ್ನ.

—- ನವೀನ್

ನಿಂತ ಮಳೆಯಲ್ಲಿ, ನಡುಗುತ್ತಿರುವ ಚಳಿಯಲ್ಲಿ, ನೀ ನನ್ನ ಕೈಯ್ಯ ಹಿಡಿದು,
ಹೆಗಲ ಒರಗಿ ನಡೆಯುತ್ತಿದ್ದರೆ, ಜೀವನದಲ್ಲಿ ಬೇರೇನು ಬೇಡವೆಂದೆನಿಸಿತು.
ಚಂದಿರನ ಬೆಳಕಲ್ಲಿ ನಿನ್ನ ಕಂಗಳ ಮಿನುಗು, ನನ್ನ ಪ್ರೀತಿಯ ಮೆಚಿ
ನಲಿವ ನಿನ್ನ ಮುಗುಳ್ನಗೆಯ ಹೊಳಪು, ನೋಡುತ್ತಾ ಕರಗುತ್ತಿಹೆನು ನಾನು.
ನಡುರಾತ್ರಿಯ ನಿಶಬ್ದ ದಾರಿಯಲ್ಲಿ ಎಷ್ಟೇ ದೂರ ಸಾಗಿದರು ದಣಿವಿಲ್ಲ, ನಡೆವ ಹಾದಿಗೆ ಕೊನೇ
ಇಲ್ಲ. ಸಾಗುತ್ತಲೇ ಇರಬೇಕೆನ್ನುವಾಸೆ ಜೀವನ ಉದ್ದಕು ಹೀಗೆ, ದಣಿವಾಗದಂತೆ ನಿನಗೆ
ನನ್ನ ಪ್ರೀತಿಯಲ್ಲಿ. ಪ್ರೀತಿಯ ಹಂಚುತ್ತಾ, ಭರವಸೆಯ ನೀಡುತ್ತಾ, ನಿನ್ನ
ನಗುವಿನಲ್ಲಿ ನನ್ನದನ್ನು ಇಟ್ಟು, ನಿನ್ನ ಮನಸಿನಲ್ಲಿ ನನ್ನ ಮನವನಿತ್ತು ಸಾಗುವಾಸೆ
ಈ ಪಯಣದಿ. ಬತ್ತದಿರಲಿ ಪ್ರೀತಿ, ಹುಟ್ಟಾದಿರಲಿ ಭೀತಿ, ಸದಾ ಚಿಮ್ಮಿ ಹೋಮುತ್ತಿರಲಿ ಸಂಪ್ರೀತಿ.

—- ನವೀನ್

Posted by: naveenkrhalli | 03/06/2010

Just ಮಾತ್ ಮಾತಲ್ಲಿ

ಪ್ರೀತಿಸೋ ಸವಿ ಹೃದಯವ ಹೊತ್ತು ಸಾಗಿದೆ ಹಸಿರ ಹೊನಲ ರಾಶಿಯಲ್ಲಿ,
ಎದುರಾದೆ ನೀ ಮುಗುಳ್ನಗೆಯ ಹೊತ್ತು ಜನಸಾಗರದಲ್ಲಿ.
ಪ್ರೀತಿಯ ನನ್ನ ಮನದಲ್ಲಿ ಬಿತ್ತು,ಅರ್ಥವಾಗದ ನಗುವ ನೀ ಹೋದೆ ಬಿಟ್ಟು,
ಹೇಳದೇ ಹೋದೆ ನಗುವಿನ ಅರ್ಥವ,ಬಿತ್ತಿದೆ ಮನದಲ್ಲಿ ಪ್ರೀತಿಯ ಬೀಜವ.
ಹುಡುಕುತ್ತಾ ಹೊರಟೆ ಆ ನಗುವ, ಮತ್ತೆ ಸಿಕ್ಕು ನೀ ನೀಡಿದೆ ಒಲವ.
ಮಾತಿಲ್ಲದೆ ಬೆರೆತವು ಪ್ರೀತಿಯ ಮನಸುಗಳು, ತಿಳಿಯದೇ ಬೇರೆಯಿತು ಕಣ್ಣ ಅಂಚಲ್ಲಿ ಪ್ರೀತಿಯು.
ಸನಿಹವಾಗಿ ಪ್ರೀತಿಯ ಅಮೃತವ ಕುಡಿದೆವು just ಮಾತ್ ಮಾತಲ್ಲಿ,
ಪ್ರೀತಿಯು ಕುಳಿತು ನಲಿಯಿತು ನಮಿಬ್ಬರ ಮನಸು ಮನಸಲ್ಲಿ.

—- ನವೀನ್

Posted by: naveenkrhalli | 14/05/2010

ಅಮ್ಮನಿಗಾಗಿ….(Mother’s day special)

ನನ್ನ ಮೊದಲ ಗೆಳತಿಯಾದೆ ನೀನು, ಕಲಿಸಿದೆ ನಾಲಕ್ಕೂ ಅಕ್ಷರವನ್ನು,
ಪ್ರೀತಿ ಉಣಿಸುತ್ತಲೇ ಎದೇಯೆತ್ತರಕ್ಕೆ ಸಲುಗಿದೆ ನನನ್ನು.
ಇಡೀ ಜಗತನ್ನೆ ಗೆಲ್ಲುವೆ ಒಂದೇ ಕೈಯಲ್ಲಿ ನಾನು,
ಜೊತೆಯಾಗಿ ನಿಂತರೆ ಇನ್ನೊಂದು ಕೈ ಹಿಡಿದು ನೀನು.
ನೋವಾದಾಗ ನನಗೆ ನೀ ಅತ್ತೆ, ನನ್ನ
ನಲಿವಿನಲ್ಲಿ ನೀ ನಕ್ಕೆ, ಸೋಲಲ್ಲೂ ಜೊತೆಯಾಗಿ ನಿಂತೆ ನೀನು,
ಕೈ ಹಿಡಿದು ಮೇಲೆತ್ತಿ ಬದುಕ ದಾರಿಯ ತೋರಿದೆ ನೀನು.
ಸಾಲು ಸಾಲುಗಳು ಗೀಚಿ ಎಸೆದರು ಮುಗಿಯಲಿಲ್ಲ ಸಾಲುಗಳು
ನನಗೆ ನೀ ಮಾಡಿದ ಎಲ್ಲವನ್ನು. ನನಗಾಗಿ ನೀ ಎಸ್ಟು ದಣಿವೆ ಅಮ್ಮ,
ನೀನಿಲ್ಲದೇ ನಾನೇನು ಇಲ್ಲ ನನಮ್ಮ. ಪ್ರೀತಿ ಏನೆಂದು ನೀ ಕಲಿಸಿದೆ,
ನನ್ನ ಕಣ್ಣಿರ ಮೊದಲು ನೀ ಒರೆಸಿದೆ. ಸಾವಿರ ಸಾವಿರ ದಿನಗಳು ಕಳೆದರು
ನೀ ನನ್ನ ಮೊದಲ ಗುರುವಮ್ಮ, ನಾ ಮೆಚ್ಚಿದ ಮೊದಲ ಪ್ರೇಯಸಿ ನೀನಮ್ಮ.
ಯಾರು ಕದಿಯಲಾಗದು ನಿನಗಾಗಿ ಇಟ್ಟ ಪ್ರೀತಿಯನ್ನು, ನಿನ್ನಂತೆ
ಪ್ರೀತಿಸಿಲ್ಲ ಯಾರು ನನನ್ನು ಇನ್ನು. ಅಮ್ಮ ನನ್ನೊಲವು ನೀ, ನನ್ನ ಬದುಕು ನೀ.
I LOVE YOU AMMA.

—- ನವೀನ್

ನೆನಪೆ ನೆನಪಾಗಿ ಉಳಿಯದಿರು, ಮತ್ತೆ ಮತ್ತೆ ಬಂದು ನೀ ಕಾಡದಿರು,
ಕದಿಯಬೇಡ ನೀ ನನ್ನ ನಿದಿರೆಯ, ಮರೆಸಬೇಡ ನನ್ನ ಹಸಿವ.
ನೊಂದ ಮನಕ್ಕೆ ಮುಳ್ಳೇರೆಯಬೇಡ, ಇಲ್ಲದಿರೊ ನೆಮ್ಮದಿಯ ನೀ ಕದಿಯಬೇಡ.
ಹೋಗು ನೆನಪೆ ನೀ ದೂರ, ಬರಿದಾದ ಮನಕ್ಕೆ ಮತ್ತೆ ತಂದೆ ನೀ ಬರ.
ಬಂದರೆ ಮನಕ್ಕೆ ಇನೆಲ್ಲಿ ಇದೆ ಉಳಿಗಾಲ.
ಅಳುತ್ತಿರುವ ಮನಕ್ಕೆ ಸವಿ ನೆನಪುಗಳು ಏಕೆ,
ನೆನೆದು ನೆನೆದು ಅಳುತ್ತಲೇ ಇರುವ ಪರಿಸ್ಥಿತಿ ಬೇಕೇ.
ಬೇಡವೆಂದು ತಳ್ಳಿದರು ದೂರ, ಮತ್ತೇಕೆ ಇಲ್ಲಸಲ್ಲದ ನೆಪವೊಡ್ಡಿ ಬರುವೆ ನೀ ಹತ್ತಿರ,
ಎಲ್ಲ ಮರೆತು ನೆಮ್ಮದಿಯ ಹುಡುಕಲು ಹೋರಟ ಮನಸಿಗೆ ಬೇಡಿಯ ಹಾಕಿ
ಮತ್ತೆ ಕರೆತಂದು ಕಣ್ಣಿರಿರಿಸುತ್ತಿರುವೆ ನೀ ನೆನಪೇ.
ಇರುವುದನೆಲ್ಲ ಹೊತ್ತು ಕೊಂಡು ಹೋದಳು ಉಸಿರೊಂದನ್ನ ಬಿಟ್ಟು ನನಗೆ,
ಇರುವುದೊಂದನ್ನ ಕದಿಯಲು ನೀನೇಕೆ ಬಂದೆ ನೆನಪೇ?

—- ನವೀನ್

Posted by: naveenkrhalli | 04/04/2010

ಹುಡುಗರ ವ್ಯತೆ……

ತುಂಬಾ ದಿನಗಳಿಂದ ನನ್ನ ಬ್ಲೋಗ್ ಓದುಗರು ನನನ್ನು ಕೇಳುತಿದ್ದ ಪ್ರಶ್ನೆ “ಯಾಕೆ ನಿಮ್ಮ ಬ್ಲೋಗ್ ನಲ್ಲಿ ಬರಿ ಧುಕ್ಕದ ಕವನಗಳು, ಏಕೆ ನೀವು ಕುಷಿಯಾಗಿರೋ ಕವನಗಳು ಬರೆಯುವುದಿಲ್ಲ?” ಅಂತ. So ಏಪ್ರಿಲ್ ತುಂಗಳು ಮೂರ್ಕರ ತಿಂಗಳು ಎನ್ನುತ್ತಾರೆ, ಅದಕ್ಕಾಗಿ ಒಂದು ಹಾಸ್ಯ ಕವನ ಬರೆಯಲು ಪ್ರಯತ್ನಿಸಿದ್ದೀನಿ. ನನ್ನ ಪ್ರಯತ್ನ ನಿಮಗೆ ಹಿಡಿಸುವುದೋ ಇಲ್ಲವೋ ಎಂದು ನನಗೆ ಕಾಮೆಂಟ್ಸ್ ಮೂಲಕ ತಿಳಿಸಿ.

ಇಲ್ಲಿದೆ ಓದಿ ನೋಡಿ

ಗೆಳತಿ, ಓ ಗೆಳತಿ, ಕೇಳಿದರೆ ನನ್ನ ವ್ಯತೆ ನೀ ನಗುತ್ತಿ.
ಪ್ರೀತಿಯ ಸವಿ ಉಣಿಸಲು ನಾ ನಿಂತರೆ ಮುಂದೆ,
ಬೇಡಿಕೆಯ ಪಟ್ಟಿ ಇಡುವೆ ನೀ ನನ್ನ ಮುಂದೆ.
ನನಗೆ ಬರುವುದೋ ಒಂದೇ ಸಂಬಳ,
ಪಾಲ್ಟಿ ಹೊಡೆದರೂ ಸಿಗುತಿಲ್ಲ ಗಿಂಬಳ.
ವಿದ್ಯಾರ್ಥಿ ಬವನ, ಶಾಂತಿಸಾಗರ್ ಎಂದರೆ ನಾನು,
KFC, Mcdonalds ಎನ್ನುವೆ ನೀನು, ಸಂಪಿಗೆ ರೋಡ್,
ಜಯನಗರ ಎಂದರೆ ನಾನು, Forum, Garuda Mall ಎಂದು ನೀನು,
ಒಳ್ಳೇ offerಗಳಿವೆ ಎಂದರೆ ನಾನು,ಪಾಪರ್ ಮಾಡುವೆ ನೀನು.
ಅರುಣ್ ಐಸ್ ಕ್ರೀಮ್ ಎಂದರೆ ನಾನು, Baskin Robins ಎನ್ನುವೆ ನೀನು,
ರೋಡ್‌ಸೈಡ್ ಟೀ ಗೆ ನಾನು ಮುಂದು,Coffee Day, Barista ಗೆ ನೀ ಮುಂದು.
ಗೆಳತಿ, ಇದು ಪ್ರೀತಿಯೇ ಎಂದರೆ ನಾನು, ಮುಗುಳ್ನಕ್ಕು ನಾಚಿಸುವೆ ನನನ್ನು ನೀನು.
ಎಂದು ಆಗುವುದೋ ಕಾಲಿ ನನ್ನ ಜೇಬು,ಎಂಬ ಆತಂಕದಲ್ಲಿ ನಾನಿಂದು.
Credit card ಬಿಲ್ಲು ಗಗನಕ್ಕೆ, Bank Balance ಪಾತಲಕ್ಕೆ.
ಕಾಮನಬಿಲ್ಲಿಗೆ ಏನೇ ಆದರೂ 7 ಬಣ್ಣ, ನನ್ನ ಗೆಳತಿಗೋ ಗಳಿಗೆಗೊಂದು ಬಣ್ಣ,
ನಕ್ಕರೆ ಜೊತೆಗೆ ನಗಬೇಕು,ಅತ್ತರೆ ಸುಮ್ಮನೇ ಪಕ್ಕದಲ್ಲಿ ಕೂತು ನೋಡಬೇಕು.
ಹೆಚ್ಚು ಮಾತನಾಡಿದರೆ ಕೊಡುವಳು ಕಾಟ, ಅಯೋ ರಾಮ, ಯಾಕೆ ಹೇಳಲಿ ನನ್ನ ಪರದಾಟ.
ಎಲ್ಲ ಹುದುಗಿರು ಹೀಗೇನ? ಅಥವ ನನ್ನ ಪಾಡು ಮಾತ್ರ ಹೀಗೇನ?

—- ನವೀನ್

Posted by: naveenkrhalli | 29/03/2010

ಎಕಾಂಗಿ ಯಾನದಲಿ….

ಎಕಾಂಗಿ ದಾರಿಯಲ್ಲಿ ಪಯಣಿಗ ನನಗಲೊಲ್ಲೆ,
ಆದರೂ ಇಂದು ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.
ಸವಿ ನೆನಪುಗಳ ಮೆಲುಕು ಹಾಕುತ್ತಾ,
ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.
ಭಾರವೆನಿಸಿದೆ ಮನವು ಇಂದು ನೋವುಗಳ ತುಂಬಿಕೊಂಡು .
ಪ್ರೀತಿಯ ಆಸರೆಯ ಬಯಸುತ್ತಾ, ಭಾರವಸೆಯ ಕಾಣದ ಕೈಯ ಹುಡುಕುತ್ತಾ,
ಹೊರಟಿಹೆನು ಕಾಣಾದುರಿಗೆ, ಮರಳಿ ಪ್ರೀತಿಯ ಮನಸುಗಳೆಡೆಗೆ,
ಪ್ರೀತಿ ಇಲ್ಲದೇ ಮನಸು ಬದುಕಲೊಲ್ಲದು,
ನೋವನ್ನು ಮರೆಮಾಚಲು ಮನಸು ಕಾದಿಹುದು, ಕಂಬನಿಯಲ್ಲಿ ಮಿಂದು,
ಒಂಟಿತನದ ಬಿಸಿಯಲ್ಲಿ ಬೆಂದು, ಒದ್ದಾಡಿದೆ ಮನವು.
ನಗಲು ಬಯಸಿದೆ ಮನವು ನೋವ ಮರೆಸಿ, ಕಾದು ಕುಳಿತಿದೆ ಪ್ರೀತಿ ಬಯಸಿ.

—- ನವೀನ್

ಬಾರಿಸು ಕನ್ನಡ ಡಿಂಡಿಮವಾ, ತಲೆ ಎತ್ತಿ ಮಾತನಾಡು ನೀ ಕನ್ನದವ.
ಅನ್ಯ ಭಾಷೆಯ ನೀ ಗೌರವಿಸು, ನಮ್ಮ ಭಾಷೆಯ ನೀ ಪ್ರೀತಿಸು.
ಇತ್ತ ನೋಡಿ ನೀ ಎಕ್ಕದವೆನ್ನಬೇಡ, ಅತ್ತನೋಡಿ ನೀ ಎನ್ನಡವೆನ್ನಬೇಡ.
ಇಂಗ್ಲೀಶ್ ನ ಮೋಹ ಬೇಡ, ಕನ್ನಡ ಮಾತನಾಡಲು ಅವಮಾನ ಬೇಡ.
ಹೆಮ್ಮೆ ಇಂದ ಮಾತನಾಡು ನೀ ಕನ್ನದವ, ಅಳುಕೇಕೆ ನಿನಗೆ ಮಾತನಾಡಲು ಸ್ವಚ್ಛ ಕನ್ನದವ.
ಸಮೃದ್ಧ ಏತಿಹಾಸ ಇರುವುದು ನಮ್ಮ ಭಾಷೆಗೆ, ಅಳಿಸದೇ ಉಳಿಸಿ ನಮ್ಮ ಹೆಮ್ಮೆಯ ಕನ್ನದವ.
ಅನ್ಯ ಭಾಷೆಯೂ ಮೇಳಲ್ಲ, ನಮ್ಮ ಭಾಷೆಯೂ ಕೀಳು ಅಲ್ಲ.ಹೇ ಕನ್ನಡಿಗ, ಏಕೆ ನಿನಗೆ
ಇರುಸು ಮುರುಸು, ಹೆಮ್ಮೆ ಇಂದ ಹೇಳು ನಾ ಕನ್ನಡಿಗನೆಂದು,
ನೆನಪಿಟ್ಟುಕೊ ನೀನಿರುವುದು ಕನ್ನಡ ನಾಡಲ್ಲಿ ಇಂದು. ಬಾರಿಸು ಕನ್ನಡ ಡಿಂಡಿಮವ,
ಓ ಕರುನಾಡ ಹೃದಯ ಶಿವ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

—- ನವೀನ್

Posted by: naveenkrhalli | 02/03/2010

ಬಾ ನನ್ನ ಮನದ ಅಂಗಳಕ್ಕೆ…..

ಏಕೋ ಕಾಣೆ ಇಂದು, ಚಂದಿರನ ಮೊಗದಲ್ಲಿ ಹೊಳಪು ಕಾಣೆನು,
ಹೂಗಳಲ್ಲಿ ನಗುವ ಕಾಣೆನು, ಏಕೆ ಇಂದು ನನ್ನೊಂದಿಗೆ ಇಲ್ಲ ನೀನು,
ಬಾಡಿ ಹೋಗುತ್ತಿರುವೆ ನಿಲಿಲ್ಲದೇ ನಾನು. ಬತ್ತಿದ ಬಾಳಲ್ಲಿ ನೆಮ್ಮದಿಯ ಕಂಡೆ ನಾ ನೀನಿಂದ,
ಬಿಸಿ ಗಾಳಿಯಲ್ಲಿ ತಂಪಾದೇ ನಾ ನೀನಿಂದ, ಬಾ ನನ್ನ ಮನಕ್ಕೆ ತಂಪೆರೆವ ತಂಗಲಿಯಾಗಿ,
ಹಸುಗೂಸ ಮುಗ್ದ ನಗೂವಾಗಿ, ಹಕ್ಕಿಯ ಚಿಲಿಪಿಲಿಯಾಗಿ. ಹೋದೆ ಏಕೆ ನೀ ದೂರ,
ಮಧುರ ನೆನಪುಗಳ ಮನದಲ್ಲಿ ಬಿಟ್ಟು ನೀ ಬಾರ, ತಾಳಲಾರೆನು ಭಾರವ, ಮನಸು ಬಿಕ್ಕಿ ಅಳುತ್ತಿದೆ ತಾಳಲಾರದೇ ನೋವ. ಬಾ ಮರಳಿ ಮನದ ಅಂಗಳಕ್ಕೆ, ಪ್ರೀತಿಯ ಸವಿ ಸಾಗರಕ್ಕೆ.
ಹೃದಯ ನಿಲ್ಲುವ ಮುನ್ನ ನೀಡು ಉಸಿರು, ಬದುಕಿದರೆ ಸಿಗುವುದು ಒಂದು ಕನಸು, ಅದರಲ್ಲೇ ಇರುವುದು ನಮಿಬ್ಬರ ಪ್ರೀತಿಯ ಮನಸು. ಏಕೆ ಈ ಮುನಿಸು, ಸುಮ್ಮನೇ ಮನಸು ಬಿಚ್ಚಿ ಪ್ರೀತಿಸು.

—- ನವೀನ್

ರಾತ್ರಿಯ ತನ್ನನೇ ಗಾಳಿಯಲಿ, ತೆಲಿರುವುದು ಮನವಿಂದು,ನಿದಿರೆಗೆ ಜಾರಲು ಒಲ್ಲದು ಮನವಿಂದು, ತನ್ನನೇ ಗಾಳಿಯ ಸ್ಪರ್ಶಿಸುತ್ತಾ, ಅಗಸದಿ ಚಂದಿರನ ನೋಡುತ್ತಾ, ಚಿಕ್ಕಿಗಳ ನಡುವಲ್ಲಿ ನಲ್ಮೆಯ ಮನಸುಗಳ ಹುಡುಕುತ್ತಾ ಬೀಸಿದ ಗಾಳಿಯಲ್ಲಿ ನನ್ನೇ ನಾ ಮರೆಯುತ್ತಾ, ಮಲಗಿಹೆನು ನಾನು, ನಿದಿರೆಯ ಮರೆಯುತ್ತಾ. ಎತ್ತ ನೋಡಿದರು ಕತ್ತಲೆಯ ಅಪ್ಪುಗೆ, ತನ್ನನೇ ಗಾಳಿಯ ಚುಂಬನ, ಸದ್ದು ಗದ್ದಲವಿಲ್ಲದೇ ಈ ನಡುರಾತ್ರಿಯಲ್ಲಿ ಮನಸು ಬಯಸುತ್ತಿದೆ ಏನೋ, ಹೊಟ್ಟೆಗೆ ಉಟವೋ, ಮನಸಿಗೆ ಪ್ರೀತೀಯೋ ನಾ ತಿಳಿಯೆ. ಆದರೂ ಹಿಡಿದೆ ಮನಸ ಆಸೆಯ. ಕಣ್ಣ ರೆಪ್ಪೆಯೂ ಕೂಡದು, ಮನಸು ಮಲಗಲು ಒಳ್ಳದು. ಇದೆ ತನ್ನನೇ ಗಾಳಿಯಲ್ಲಿ ಮನಸನ್ನ ತೇಲಿಬಿಡುವಾಸೆ, ಹಾಗೆ ತೇಲಿಬರುವ ಮನಸುಗಳ ಹಿಡಿಯುವ ಆಸೆ.

—- ನವೀನ್

Older Posts »

Categories

Follow

Get every new post delivered to your Inbox.

Join 33 other followers